`ಮರೆಯಲಾರೆ` ಭರ್ಜರಿ ಹಾಡು
Posted date: 09 Thu, Jul 2015 – 08:26:55 AM

ಸುರಭಿ ಟಾಕೀಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ‘ಮರೆಯಲಾರೆ’. ಈ  ಚಿತ್ರಕ್ಕೆ ನಾಯಕ ತಾಂಡವ್ ನೃತ್ಯವಿರುವ ಒಂದು ಸುಂದರ ಗೀತೆಯನ್ನು ರಾಜರಾಜೇಶ್ವರಿ ಆರ್ಚ್ ಬಳಿ ಚಿತ್ರೀಕರಿಸಿಕೊಳ್ಳಲಾಗಿದೆ. ನೋಬೆಲ್ ಆರ್ಟಿಸ್ಟ್ ಅವರ ನೃತ್ಯ ನಿರ್ದೇಶನದ ಹಾಡು ಖ್ಯಾತ ನಿರ್ದೇಶಕ ಅರ್ಜುನ್ ಜನ್ಯ ಅವರ ಕಂಠದಲ್ಲಿ ಮೂಡಿಬಂದಿರುವುದರಿಂದ ವಿಶೇಷ ಮೆರುಗು ಸಿಕ್ಕಿದಂತಾಗಿದೆ ಎಂದು ನಿರ್ದೇಶಕ ಶರತ್ ಖಾದ್ರಿ ಸಂತಸ ವ್ಯಕ್ತಪಡಿಸಿದ್ದಾರೆ.
‘ಮರೆಯಲಾರೆ’ ಶರತ್ ಖಾದ್ರಿ ಅವರ ದ್ವಿತೀಯ ಚಿತ್ರ.  ಈ ಹಿಂದೆ ‘ಸ್ಯಾಂಡಲ್‌ವುಡ್  ಸರಿಗಮ’ ಕೆಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ‘ಮರೆಯಾಲಾರೆ’ ಸಮೂಹದಿಂದ ಹಣ ಸಹಾಯ (ಕ್ರೌಡ್ ಫಂಡಿಂಗ್) ಪಡೆದು ತಯಾರಾಗುತ್ತಿರುವ ಚಿತ್ರ. ಇದರಲ್ಲಿ ಪ್ರೀತಿ, ಸಂಬಂಧ, ಕನಸುಗಳ ವಿಚಾರವನ್ನು ಶರತ್ ಖಾದ್ರಿ ಅವರು ಹೇಳಲಿದ್ದಾರೆ.
ಪ್ರೇಮಕಥೆಯಲ್ಲಿ ಹಲವು ತಿರುವುಗಳನ್ನು ತುಂಬಿರುವ ‘ಮರೆಯಲಾರೆ’ ಚಿತ್ರಕ್ಕೆ ಚಿಕ್ಕಮಗಳೂರು, ಮಧ್ಯ ಪ್ರದೇಶದ ‘ಪಂಚ ಮರ್ಹಿ’ ಹಾಗೂ ಉತ್ತರ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮಧ್ಯಪ್ರದೇಶದ ಪಂಚ ಮರ್ಹಿಯಂತೂ ಸಿನೆಮಾದ ಹಲವು ಸನ್ನಿವೇಶಗಳಿಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಶರತ್ ಖಾದ್ರಿ.
ಅರ್ಜುನ್ ಜನ್ಯ ಅವರು ‘ಮರೆಯಲಾರೆ’ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಕಿರಣ್ ಕುಮಾರ್ ಚಿತ್ರದ ಛಾಯಾಗ್ರಾಹಕ. ತಾಂಡವ್ ಚಿತ್ರದ ನಾಯಕ, ಪವಿತ್ರ ಬೆಳ್ಳಿಯಪ್ಪ ಈ ಚಿತ್ರದ ನಾಯಕಿ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed